ಗುರಿಯಿಲ್ಲದಂತೆ ನಿರರ್ಥಕ
ಸವೆದ ಕಾಲುಗಳು, ಹಸಿ ಮುಂಜಾವು,
ಕಾಲುದಾರಿಗೆ ಅಪರಿಚಿತೆಯಾಗಿ ದಾರಿಗಾಣದೆ
ಸಾಮರ್ಥ್ಯದ ಆಗಮನಕ್ಕೆ ಕೂಗಿದಳು, ಎಳೆ ಬಿಸಿಲಿನಲ್ಲಿ ನಿಂತು.
ಆದರೆ ನಿಂತಿಲ್ಲವಲ್ಲ ಯಾರೂ ಕಾಡಿಗೆ ಕಾವಲು
ಕರುಣೆಯ ಕಂಬನಿಯನ್ನು ಸುರಿಸಲು
ಉತ್ತರಿಸುವುದೇ ತೊದಲುವ ಎಳೆ ಮುಂಜಾವು?
ಶಕ್ತಿಹೀನಳಂತೆ ಅಲ್ಲೇ ಕುಳಿತು ಕಾದಳು
ಬೇರ್ಯರು ಬೆಕವ್ವ ದಾರಿ ತೋರಲು?
ನೀನಿಲ್ಲವೆನವ್ವ, ಸ್ವಬೆಂಬಲ ನೀಡಲು
ದೂರವಿರುವರು ಬೇಕಾದವರು,
ನಡೆಮುಂದೆ ಖಚಿತವಾಗಿ ಹಿಂದಿರುಗುವರು
ಮಲಗಿದ್ದ ಕಣ್ಣುಗಳು ಹೊಸ ಕಾಂತಿ ಕಂಡಾಗ,
ಎಲ್ಲಿಂದ ಹೊಮ್ಮಿತು ಆಶ್ವಾಸನೆ? ಬೆರಗಾದಳು
ನನ್ನ ಕನಸೇ ಮತನಾಡಿತೆ ಎಂದು ಕೂಗಲು
ಏನೂ ಹೇಳಲಿಲ್ಲ ಕಾಡಿನ ಕಗ್ಗತ್ತಲು....
ರಾತ್ರಿಯಾದರೇನಂತೆ ಅವಳಿಗದು ಹಗಲು
ಬಿದ್ದು ಹೋದ ಜೀವಕ್ಕೆ ಭರವಸೆ ಮೂಡಲು
ಸ್ಥೈರ್ಯ, ಸಂತೋಷ, ಸ್ವಾಭಿಮಾನ ಚಿಮ್ಮಲು,
ದಾರಿಕಂಡಿತು, ಕತ್ತಲಲ್ಲೂ ಮುಂದುವರೆದಳು.
Subscribe to:
Post Comments (Atom)
0 comments:
Post a Comment