ಆರಂಭ

ಮೊದಲ ಹೆಜ್ಜೆಗಳು.....





ದಿನನಿತ್ಯದಂತೆ ಕಾಲೇಜು ಮುಗಿಸಿದನಂತರದ ಸೋಮಾರಿ ಸಂಜೆ. ಎಂದಿನಂತೆ ಸಣ್ಣ ಗೊಂದಲಗಳು ಗೋಚರವಾಗಿ, ಸುಲಭ ಪ್ರಶ್ನೆಗಳಿಗೆ ನಿಲುಕದ ಮಬ್ಬಿನಲ್ಲಿ ಏನನ್ನೋ ಗೊಣಗುತ್ತಿದೆ. ಅನಿರೀಕ್ಷಿತವಾಗಿ ತರಲೆ ಫೋನ್ ಕೂಡ ಕಿರುಚಲಾರಂಬಿಸಿತು, ಒಂದು ಕ್ಷಣದ ಮೌನವನ್ನು ಕದಿಯುತ್ತಾ. 


 "Radio Show ಅಂತೆ, ಮಾಡ್ತ್ಯ?" 


 ಪ್ರತೀ ದಿನ ಫೋನ್ ಮಾಡಿ ತಲೆ ತಿನ್ನುವ ಸ್ವಾಭಾವದವನಲ್ಲವಾಗಿದ್ದರೂ ಹೀಗೂ ಒಮ್ಮೊಮ್ಮೆ ಎಲ್ಲರನ್ನು ಆಶ್ಚರ್ಯ ಪಡಿಸುವ ಮನುಷ್ಯ ಕೃಷ್ಣ. “ಎಲ್ಲಿಂದ ಬಂದ್ಯಪ್ಪ ಮಹಾಪುರುಷ?" ಅಂತ ಕೇಳುವ ಮುನ್ನವೇ ತನ್ನ ಚಮತ್ಕಾರವನ್ನು ತೋರಿಸುವ ಅಸಾಧ್ಯ ಪಾರ್ಟಿ. ಈ ಆಹ್ವಾನದ ವಿಶೇಷ ನನಗೆ  ಕ್ಷಣಾರ್ಧದಲ್ಲಿ  ಅರ್ಥವಾಯಿತು.


 
ಹಿಂಜರಿಯದಂತೆ, ನಗುತ್ತಾ ಖಂಡಿತ ಎಂದೆ.


 ಇದು "ಚಿಂದಿ ಚಿತ್ರಾನ್ನ" ರೇಡಿಯೋ ಶೋ ದ ಪ್ರಾರಂಭದ ದಿನಗಳು, ನಮ್ಮ ಮೊದಲ ಹೆಜ್ಜೆ. ಮುಂದಿನ ಶನಿವಾರ ಬೆಳಿಗ್ಗೆ ಬೇಗ ಎದ್ದು, ಬಿಸಿ ಬಿಸಿ ಫಿಲ್ಟರ್ ಕಾಫಿ ಕುಡಿದು Fremont ನ Radio Zindagi Studios ಎದುರುಗಡೆ ಹಾಸ್ಯ ಮಾಡುತ್ತಾ ನಿಂತಿದ್ದಾಗ ಇದು ನಿಜವೇ? ಎಂದು ಭಾಸವಾಯಿತು. ನಮ್ಮ ಈ ಹಾಸ್ಯಾಸ್ಪದ ಮಾತುಗಳು, ಹರಟೆಗಳನ್ನು ಜನರು ಕೆಳುತ್ತಾರ? ಎನ್ನುವ ಪ್ರಶ್ನೆ. ಸಮಯ ಸಮೀಪಿಸುತ್ತಿತ್ತು. ಸ್ವಲ್ಪ ಅಂಜಿಕೆ, ಸಿಕ್ಕಾಪಟ್ಟೆ ಹುರುಪು.




 "ನಮಸ್ಕಾರ Bay Area, ಇದು ನಿಮ್ಮ RJ Lucky" ಎಂದು ನಗುತ್ತಲೇ ಶುರು ಮಾಡುತ್ತಾ ಸರಾಗವಾಗಿ ಮುಂದುವರಿಸಿದೆವು. ಕೊನೆಗೂ ಏನನ್ನೋ ಶುರು ಮಾಡಿದ ಸಂಬ್ರಮ. ಆ ದಿನವನ್ನು ನಾ ಮರೆಯಲಾರೆ.




 ಒಂದು ರೇಡಿಯೋ ಶೋ ಪ್ರಾರಂಭಿಸುವುದು ಸುಲಭ ಕೆಲಸವಲ್ಲ. ಅದಕ್ಕೆ ಬೇಕಾದ 
ಶ್ರದ್ದೆ ಅಘಾದವಾದದ್ದು. ದುಡ್ಡು, ಶ್ರಮ ಅಗತ್ಯ. ಆ ದಿನ ಅದನ್ನು ನಮ್ಮ ಅರಿವಿಗೆ ತಂದಿತು. ಕೆಲಸಕ್ಕೆ ತಕ್ಕಂತೆ ಶೋ ಗೆ ಬೇಕಾಗಿರುವ ಆಸಕ್ತಿಯಿಂದಲೇ ನಾವು ಮುಂದುವರಿದೆವು. 


ಜಗತ್ತಿನಲ್ಲಿ ಮಾತಿಗೆನೂ ಕೊರತೆ ಇಲ್ಲ, ಆದರೆ ಸ್ವಲ್ಪ ತರಲೆ, ಪೂರ್ತಿ ಮಜಾ ಇರೋ ಜಗಲಿ ಕಟ್ತೆಯ ಹರಟೆಗಳು, ನಗುವ ನಗಿಸುವ ತರಲೆ ಟಪೊರಿಗಳ ಖಿಲಾಡಿ ಮಾತುಕತೆಗಳು ಕಡಿಮೆಯಾಗುತ್ತಿರುವ ಸಂಧರ್ಬ ನಿಮ್ಮ ಅನುಭವಕ್ಕೂ ತಿಳಿದಿರಬೇಕು. "ಲೈಫ್ ತುಂಬ tension ಸ್ವಾಮಿ." ಅಂತ ಎಷ್ಟು ಸಲ ಹೇಳಿದ್ದೀರ ಒಮ್ಮೆ ಎಣಿಸಿ ನೋಡಿ. ಒಂದು ಗಂಟೆ ಅವೆಲ್ಲವನ್ನು ಪಕ್ಕಕೆ ಇಟ್ಟು ಮಾತಾಡುವ ಅವಕಾಶ ನೀಡುವ, ಮನರಂಜನೆ, ಗೀತೆಗಳನ್ನು ಕೇಳಿಸಿ ಸಂತೋಷ ಪಡಿಸುವ ನಿಮೆಲ್ಲರ ಅಚ್ಚು ಮೆಚ್ಚಿನ "ಚಿಂದಿ ಚಿತ್ರಾನ್ನ" ಇಂಥ ಕೆಲಸಗಳ ಮಧ್ಯವೇ ಪ್ರಾರಂಭವಾಗಿದ್ದು October 22nd, ೨೦೧೧ ಅಂದು. 


 ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಬೆಳೆದು ಬಂದ ತರಲೆ ಬುದ್ದಿ, ಮಾತಿನ ಚಟ ಇವೆಲ್ಲವನ್ನೂ ಹಂಬಲಿಸುತ್ತಿದ ನಮಗೆ ಇದು ಒಳ್ಳೆ ಮಧ್ಯಮ ಅನ್ನಿಸಿತು. ಪ್ರಯತ್ನಕ್ಕೆ ಬೇಕಿದ್ದ ಉತ್ಸಾಹದ ಕೊರತೆ ಇರಲಿಲ್ಲ , ಸ್ಪೂರ್ಥಿಯೇನೂ ನಮಗೆ ಕಡಿಮೆ ಇರಲಿಲ್ಲ. ಈ ಸಮಯದಲ್ಲಿ ಕನ್ನಡ ಕೂಟದ ಪದ್ಮ ರಾವ್ ಹಾಗೂ ಅಭಿಜಿತ್ ಭರದ್ವಾಜ ನಮಗೆ ಬೆನ್ನೆಲುಬಾಗಿ ನಿತರು, Radio Zindagi ಯಾ ಪ್ರವೀಣ್ ನಮಗೆ ಕೊಟ್ಟ ಪ್ರೋತ್ಸಾಹ ಅಷ್ಟಿಷ್ಟಲ್ಲ. 


 ಮಾತು ಒಂದು ಕಲೆ, ಸ್ವಾಮಿ. ಮೊದಮೊದಲಿಗೆ ಅನಿಶ್ಚಿತವಾಗಿದ್ದ ಇಬ್ಬರು ಕಾಲೇಜ್ ಹುಡುಗರಿಗೆ ಸಿಕ್ಕ ಪ್ರತಿಕ್ರಿಯೆ, ಪ್ರೀತಿ ನೋಡಿ ನಮಗೆ ತುಂಬ ಸಂತೋಷವಾಗಿದೆ. ನಮ್ಮ ಪ್ರತಿಭೆಯನ್ನು ಗುರುತಿಸಿ ನಮಗೆ ಈ ಅವಕಾಶವನ್ನು ದೊರಕಿಸಿಕೊಟ್ಟಿದಕ್ಕೆ, ನಮ್ಮಲ್ಲಿ ವಿಶ್ವಾಸ ಇಟ್ಟಿದಕ್ಕೆ ಧನ್ಯವಾದ. 




ಅಂಬೆಗಾಲಿಡುತ್ತಲೇ ನಮ್ಮ ಶೋ ಮೊದಲನೇ ವಾರದಲ್ಲಿ ತನ್ನ ಫಾಸೆಬೂಕ್ ಪೇಜ್ ನಲ್ಲಿ ೪೨ 'likes' ಗಳಿಸಿತು. ಬೇ ಏರಿಯ ದ ಜನತೆ ಅಷ್ಟೇ ಅಲ್ಲದೆ ಟೆಕ್ಸಾಸ್, ಬೆಂಗಳೂರು, ಹಿಂಗೆ ಅನೇಕ ಪ್ರದೇಶಗಳಲ್ಲಿ ಜನಪ್ರಿಯತೆ ಮೆರೆದಿದೆ ನಮ್ಮ ಕಾರೇಕ್ರಮ. ಇದು ಕನ್ನಡ ಕೂಟ ಹಾಗೂ Radio Zingagi ಯ ಸಹಾಯವಿಲ್ಲದಿದ್ದರೆ ಅಸಾಧ್ಯವಾಗುತಿತ್ತು. 




 ಒಂದು ಸಣ್ಣ ಯೋಚನೆ ಈಗ ಒಳ್ಳೆ ಪ್ರತಿಕ್ರಿಯೆ ಗಳಿಸುತ್ತಿದೆ. ಉನಿವೆರ್ಸಿಟಿ MS ಪದವಿಗಾಗಿ ಓದುತ್ತಿರುವ ನಿಮ್ಮ ಕಿಲಾಡಿ ಹುಡುಗ RJ ಕೃಷ್ ಮತ್ತು ನಿಮೆಲ್ಲರ ಅಚ್ಚು ಮೆಚ್ಚಿನ ಬಿಸ್ಕೆಟ್ ರಾಣಿ RJ ಲಕ್ಕಿ ಇಂದು ಕೇಳುಗರಿಗೆ ಚಿರಋಣಿ.




 "ಚಿಂದಿ ಚಿತ್ರಾನ್ನ" ಬರೀ ಹರಟೆಯ ಖಜಾನವಲ್ಲ, ನಾವು ಬರೀ ಮತುಗಾರರಲ್ಲ. ಇದು ಹಾಡು, ಹಾಸ್ಯ, ಕುಚೋದ್ಯದ ಒಂದು ಸಂಪೂರ್ಣ ಅನುಭವ. ಶೋ ನಲ್ಲಿ ನಾವು ಬೆಂಗಳೂರಿನಿಂದ ಬಿಸಿ ಬಿಸಿ ಸುದ್ದಿ ತರುತ್ತೇವೆ. ವಾರ್ತೆ ನೀಡುತ್ತೇವೆ. Bay Area ದ ಹಲವಾರು ಕರೆಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಹಾಗೆ light ಆಗಿ ಯಾರಿಗಾದರು ಬಕ್ರ ಮಾಡ್ಬೇಕು ಅಂದ್ರೆ "ಕಿವಿ ಮೇಲೆ ಫ್ಲೋವೆರ್" ಇಟ್ಟು "life ಹೆಂಗಿದೆ ಸ್ವಾಮಿ?" ಅಂತ ವಿಚಾರಿಸುತ್ತೇವೆ. ಕೇಳುಗರ ಸಲಹೆಗಳನ್ನು ಗಮನಿಸುತ್ತೇವೆ, ಸುಮಧುರ ಹಾಡುಗಳನ್ನು ಕೇಳಿಸುತ್ತೇವೆ, ಶನಿವಾರದ ಬೆಳಿಗ್ಗೆ ಏಳಕ್ಕೆ ಆಗದವರಿಗೆ ಸುಪ್ರಭಾತವಾಗುತ್ತೇವೆ. ಮಧ್ಯ ಮಧ್ಯ ನಮ್ಮ ಶೋ "ವಾರದ ಸ್ಪೆಷಲ್" ಸಂಚಿಕೆಗಳನ್ನು ಏರ್ಪಡಿಸುತ್ತೇವೆ. ಇದು ನೀವು ಕರೆ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಅವಕಾಶ. ಅವನ್ನು ಮಾತ್ರ ಮಿಸ್ ಮಾಡ್ಕೋಬೇಡಿ. 


"ಚಿಂದಿ ಚಿತ್ರಾನ್ನ" ವಾರ್ತೆ, ಹರಟೆ, ಹಾಸ್ಯದ ಸವಿಯಾದ ಮಿಶ್ರಣ. ಹಿಂಗೆ ಇಲ್ಲಿಯವರೆಗೂ ನಾವು ನಮ್ಮ ಕಾರೇಕ್ರಮದಲ್ಲಿ ಕನ್ನಡ ಕೂಟದ "ಪ್ರೇರಣ" ಶೋ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದೀವಿ, ನಮ್ಮ Studio ಗೆ ಹಲವಾರು ಜನ ಬಂದು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡರು. ಹೊಸ ಜನ, ಹೊಸ ಸಂದರ್ಬಗಳಿಗೆ ನಾವು ಪರಿಚಿತರಾದೆವು. ಕ್ರಮೇಣ ವಾಗಿ  ಪ್ರತಿ ಶನಿವಾರ Studio ಗೆ ಹೋಗೋದೇ ನಮ್ಮ ಅವಿಭಾಜ್ಯ ಅಂಗವಾಗಿಹೋಗಿದೆ.






 ಮಧ್ಯೆ ಮಧ್ಯೆ ಹಲವಾರು ಗೊಂದಲಗಳು ಯೆದಿರಿಸಿದ್ದೂ ಉಂಟು. ಆದರೆ ನಮ್ಮ ಆಸಕ್ತಿಯಲ್ಲಿ ಅದೆಲ್ಲವನ್ನು ಮೆಟ್ಟಿ ನಿಂತಾಗಿದೆ. ನಮ್ಮ ಕಾರೇಕ್ರಮಕ್ಕೆ  ಪ್ರತಿಭಾನ್ವಿತ ಮಾಲ ಅವರು RJ ಆಗುವುದಕ್ಕೆ ಒಪ್ಪಿಕೊಂಡು ಹೊಸ ಮೆರಗು ತಂದಿದ್ದಾರೆ. "ಚಿಂದಿ ಚಿತ್ರಾನ್ನ" ಕ್ಕೆ ವಿವಿಧವಾದ ಪರೀಕ್ಷೆಗಳು ಯೆದುರಾದಂತೆ ಹೊಸ ಹೊಸ ಬದಲಾವಣೆಗಳನ್ನು ಮೈಗೂಡಿಸಿಕೊಂಡು ಬಂದು ನಿಮಗೆ vishista ಸಂಗೀತವನ್ನು ಆಸ್ವಾದಿಸುವ ಅನುಭವನ್ನು ನೀಡುತ್ತಾ ಬಂದಿದ್ದೇವೆ. ಮನರಂಜಿಸಲು ಮರೆತಿಲ್ಲ, ಮರೆಯುವುದಿಲ್ಲ. ನಮ್ಮ ಪ್ರೀತಿಯ ಕೆಳುಗರಿವೆ ಪ್ರತೀ ವಾರವೂ ಏನಾದರೂ ಹೊಸತಾದ ವಿಷಯವನ್ನು ತರುವುದು ನಮ್ಮ ಕರ್ತವ್ಯ. ಇದನ್ನು ಮನಸ್ಸಲ್ಲಿ ಇಟ್ಟುಕೊಂಡೇ ನಿಮೆಲ್ಲರನ್ನು ಮನರಂಜಿಸುತ್ತಾ, ನಗಿಸುತ್ತಾ, ನಾವೂ ನಗುತ್ತಾ ಸುಖವಾಗಿದ್ದೇವೆ. 




 ಇಲ್ಲಿಯವರೆಗೂ ಹಲವಾರು ಅಭಿಮಾನಿಗಳನ್ನು ನಮ್ಮ ಕರೆಕ್ರಮ ಗಳಿಸಿಕೊಂಡು ಬಂದಿದೆ. ಬನ್ನಿ ಸ್ವಲ್ಪ ಮಾತಾಡಿ, ಚೂರು ಹರಟೆ ಹೊಡಿಯೋಣ, ಪೂರ್ತಿ ಮಜಾ ಮಾಡೋಣ. ಸ್ನೇಹಿತರೆ, ಬೆಳಿಗ್ಗೆ ೯-೧೦ AM ಸಮಯಕ್ಕೆ Radio Zindagi ೧೫೫೦ ಕೇಳಿಸ್ಕೋಳೋಕ್ಕೆ ಮರಿಬೇಡಿ. 


 ಸಿಗ್ತ್ಹೀವಿ ಸ್ವಾಮೀ, ಸ್ವಲ್ಪ ತರಲೆ, ಸ್ವಲ್ಪ ಹಾಸ್ಯ ಪೂರ್ತಿ ಮಜಾ ಮಾಡುತ್ತಾ!




 --ನಿಮ್ಮ ಪ್ರೀತಿಯ RJ ಗಳು.